ಮಂಗಳವಾರ, ಸೆಪ್ಟೆಂಬರ್ 13, 2011

ಮೂರು ಹನಿಗಳು......

ವೇದ ಸುಳ್ಳಾದರೂ
ಗಾದೆ ಸುಳ್ಳಾಗದು
ಹೇಗೆ ಅಂದಿರಾ.?!
ಉದಾಹರಣೆಗೆ,
ಅತ್ತೆಗೊಂದು ಕಾಲ
ಸೊಸೆಗೊಂದು ಕಾಲ
ಇಂದು ಸೋನಿಯಾ
ಅಂದು ಇಂದಿರಾ..!

.........

ರಾಜಕಾರಣಿಗಳಿಗೆ ಅಭ್ಯಾಸ
ಕೇಳಿದ್ದು ಸಿಗದಿದ್ದರೆ ಪಕ್ಷಾಂತರ
ಜೊತೆಗೆ ರಾಜಿನಾಮೆ ಸ್ಥಾನಕ್ಕೆ
ಈಗ ಸ್ವಲ್ಪ ವ್ಯತ್ಯಾಸ..
ಅಲ್ಲಿಂದಿಲ್ಲಿ ಸ್ಥಳಾಂತರ
ದಿಲ್ಲಿಯಿಂದ ಕೃಷ್ಣ ಜನ್ಮಸ್ಥಾನಕ್ಕೆ !

.........

ಪೇಪರಿನಲ್ಲಿ ಸುದ್ದಿ..
ಟೂತ್ ಪೇಸ್ಟಿನಲ್ಲಿ ಕೂಡಾ ನಿಕೋಟಿನ್ನು
ಹಾಗಾಗಿ..,
ಧೂಮಪಾನ ಮಾಡಬೇಕಿಲ್ಲ ಇನ್ನು!
ಬಿಟ್ಟುಬಿಡಿ ಹಾಳು ಸಿಗರೇಟ್
ನಿತ್ಯ ಉಪಯೋಗಿಸಿ ಕೋಲ್ಗೇಟ್

........