ಸತ್ಯ ಸಹನೆ ಶಾಂತಿ ಮಂತ್ರಗಳೇ ನಮ್ಮ ಅಸ್ತ್ರ ಎನ್ನುತ್ತೇವೆ
ಕೆಟ್ಟ ಹಸಿವೆಗೆ,ನಮ್ಮ ಸ್ವಾರ್ಥಕೆ ನಮ್ಮವರನ್ನೇ ಕಿತ್ತು ತಿನ್ನುತ್ತೇವೆ
ದೇಶ ಪ್ರೇಮ,ಭಾಷಾಭಿಮಾನ,ಜಾತ್ಯಾತೀತತೆಯ ನುಡಿಯುತ್ತೇವೆ
ಕೊನೆಯಿರದ ದಾಹಕ್ಕೆ ಕೊನೆಗೆ ಹಸಿರಕ್ತವನ್ನಾದರೂ ಕುಡಿಯುತ್ತೇವೆ
ಅಸಾಧ್ಯ,ಅಗೋಚರ ಭವಿಷ್ಯಗಳ'ದಿವ್ಯ'ದೃಷ್ಟಿಯಲ್ಲಿ ಕಾಣುತ್ತೇವೆ
ಕಣ್ಣೆದುರಿನ ಕೊಲೆ,ಅತ್ಯಾಚಾರ ಹಿಂಸೆಗಳಿಗೆ ಕುರುಡರಾಗುತ್ತೇವೆ
ನೆಟ್,ಮೊಬೈಲ್,ಚಾಟ್ ನಲ್ಲಿ ಅಪರಿಚಿತರಲ್ಲೂ ಮಾತನಾಡುತ್ತೇವೆ
ಮನೆಯ ಮೂಲೆಯಲ್ಲಿನ ಹಿರಿಯರೆಂದರೆ ಮೂಕರಾಗುತ್ತೇವೆ
ಊರಿನ ಆಗುಹೋಗು,ಕ್ರಿಕೆಟ್ ಸ್ಕೋರ್ ತಡವಿಲ್ಲದೆ ಕೇಳುತ್ತೇವೆ
ದೀನರ ಅಳಲು,ಆಕ್ರಂದನ ನೋವುಗಳಿಗೆ ಕಿವುಡರಾಗುತ್ತೇವೆ
ಮುಗಿಲೆತ್ತರಕೆ ಹಾರುತ್ತೇವೆ,ಚಂದ್ರಮಂಗಳಗಳ ಮುಟ್ಟುತ್ತೇವೆ
ಜಾತಿ ಧರ್ಮ,ಮಠಮಂದಿರಗಳ ಹೆಸರಿನಲ್ಲಿಗೋರಿ ಕಟ್ಟುತ್ತೇವೆ
ಬಡವರ ಅನಾಥರ ಬೆವರಿನಲ್ಲಿ ಸೌಧ ಬಂಗಲೆಗಳ ಕಟ್ಟುತ್ತೇವೆ
ನೆಮ್ಮದಿ ಸುಖ ಸಂತೋಷ ಸಂಬಂಧಗಳ ದೂರ ಅಟ್ಟುತ್ತೇವೆ
ಸ್ವರ್ಗವೆಂಬುದ ಇಲ್ಲಿಯೇ ಬಿಟ್ಟು ನರಕದ ಬಾಗಿಲು ತಟ್ಟುತ್ತೇವೆ
ಎಷ್ಟೊಂದು ಮುಂದುವರಿದಿದ್ದೇವೆ ನಾವು..?!
ಕೆಟ್ಟ ಹಸಿವೆಗೆ,ನಮ್ಮ ಸ್ವಾರ್ಥಕೆ ನಮ್ಮವರನ್ನೇ ಕಿತ್ತು ತಿನ್ನುತ್ತೇವೆ
ದೇಶ ಪ್ರೇಮ,ಭಾಷಾಭಿಮಾನ,ಜಾತ್ಯಾತೀತತೆಯ ನುಡಿಯುತ್ತೇವೆ
ಕೊನೆಯಿರದ ದಾಹಕ್ಕೆ ಕೊನೆಗೆ ಹಸಿರಕ್ತವನ್ನಾದರೂ ಕುಡಿಯುತ್ತೇವೆ
ಅಸಾಧ್ಯ,ಅಗೋಚರ ಭವಿಷ್ಯಗಳ'ದಿವ್ಯ'ದೃಷ್ಟಿಯಲ್ಲಿ ಕಾಣುತ್ತೇವೆ
ಕಣ್ಣೆದುರಿನ ಕೊಲೆ,ಅತ್ಯಾಚಾರ ಹಿಂಸೆಗಳಿಗೆ ಕುರುಡರಾಗುತ್ತೇವೆ
ನೆಟ್,ಮೊಬೈಲ್,ಚಾಟ್ ನಲ್ಲಿ ಅಪರಿಚಿತರಲ್ಲೂ ಮಾತನಾಡುತ್ತೇವೆ
ಮನೆಯ ಮೂಲೆಯಲ್ಲಿನ ಹಿರಿಯರೆಂದರೆ ಮೂಕರಾಗುತ್ತೇವೆ
ಊರಿನ ಆಗುಹೋಗು,ಕ್ರಿಕೆಟ್ ಸ್ಕೋರ್ ತಡವಿಲ್ಲದೆ ಕೇಳುತ್ತೇವೆ
ದೀನರ ಅಳಲು,ಆಕ್ರಂದನ ನೋವುಗಳಿಗೆ ಕಿವುಡರಾಗುತ್ತೇವೆ
ಮುಗಿಲೆತ್ತರಕೆ ಹಾರುತ್ತೇವೆ,ಚಂದ್ರಮಂಗಳಗಳ ಮುಟ್ಟುತ್ತೇವೆ
ಜಾತಿ ಧರ್ಮ,ಮಠಮಂದಿರಗಳ ಹೆಸರಿನಲ್ಲಿಗೋರಿ ಕಟ್ಟುತ್ತೇವೆ
ಬಡವರ ಅನಾಥರ ಬೆವರಿನಲ್ಲಿ ಸೌಧ ಬಂಗಲೆಗಳ ಕಟ್ಟುತ್ತೇವೆ
ನೆಮ್ಮದಿ ಸುಖ ಸಂತೋಷ ಸಂಬಂಧಗಳ ದೂರ ಅಟ್ಟುತ್ತೇವೆ
ಸ್ವರ್ಗವೆಂಬುದ ಇಲ್ಲಿಯೇ ಬಿಟ್ಟು ನರಕದ ಬಾಗಿಲು ತಟ್ಟುತ್ತೇವೆ
ಎಷ್ಟೊಂದು ಮುಂದುವರಿದಿದ್ದೇವೆ ನಾವು..?!