ಗೆಳತಿ ನೀನೆಂದರೆ ಯಾಕೋ
ಮೂಡಿದೆ ಕನಸು,ಕೂಡಿದೆ ಮನಸು
ಬೇರೆ ನಾ ಹೇಳುವುದೇನು..?
ಅರೆಕ್ಷಣ ಕೂಡಾ ನೀ ನೊಂದರೆ ಸಾಕು
ಕರಗುವ ಹೃದಯ,ಮರುಗುವ ಜೀವ
ಆ ನೋವಲ್ಲಿಯೇ ಬದುಕುವೆ ನಾನು !
...................
ಮಳೆಹನಿಯೊಂದು ಉರುಳಿ
ಕಡಲಾಳ ಸೇರಿ
ಆಗುವುದು ಸ್ವಾತಿಮುತ್ತು
ಕಣ್ಣೋಟವೊಂದು ಹೊಳೆದು
ಹೃದಯಗಳೆರಡು ಸೇರಿ
ಪ್ರೀತಿಯಾಗಿ ಬೆಳೆವ ಪರಿ
ಯಾರಿಗೇನು ಗೊತ್ತು..!
..................
ಅಗಣಿತ ತಾರೆಗಳಿದ್ದರೂ ಕೂಡಾ
ಬಾನಿಗೆ ಆ ಚಂದಿರನೊಬ್ಬನೇ ಸಾಕು
ಸಾವಿರ ಹುಡುಗಿಯರಿದ್ದರೂ ಎದುರಲಿ
ನನ್ನೀ ಬದುಕಿಗೆ ನೀನೊಬ್ಬಳೇ ಬೇಕು
...................
ನೀನಂದು ಸಿಕ್ಕಿದ್ದು,ಆಗ ನಕ್ಕಿದ್ದು
ಆಮೇಲೆ ಪ್ರೀತಿ ಉಕ್ಕಿದ್ದು
ಕೇವಲ ನಪ ಮಾತ್ರ..
ಹಾಗೆಯೇ ಕೊನೆಗೆ ದಕ್ಕಿದ್ದು
ನಿನ್ನ ನೆನಪು ಮಾತ್ರ..!
ಸರಳ ಸುಂದರ ಕವಿತೆ...
ಪ್ರತ್ಯುತ್ತರಅಳಿಸಿ"ಮಳೆಹನಿಯೊಂದು ಉರುಳಿಕಡಲಾಳ ಸೇರಿಆಗುವುದು ಸ್ವಾತಿಮುತ್ತುಕಣ್ಣೋಟವೊಂದು ಹೊಳೆದುಹೃದಯಗಳೆರಡು ಸೇರಿಪ್ರೀತಿಯಾಗಿ ಬೆಳೆವ ಪರಿಯಾರಿಗೇನು ಗೊತ್ತು..!"
ಈ ಸಾಲುಗಳು ಮನ ಮುಟ್ಟುವಂತಿದೆ....
--
ಧನ್ಯವಾದಗಳು ಸುಷ್ಮಾ...ನಿಮ್ಮ ಪ್ರೋತ್ಸಾಹ ಹೀಗೇ ಇರಲಿ
ಪ್ರತ್ಯುತ್ತರಅಳಿಸಿ