ಗುರುವಾರ, ಏಪ್ರಿಲ್ 7, 2011

ಅ(ವ್ಯ)ವಸ್ಥೆಯ ಸುತ್ತ.....

ಕೊಟ್ಟಿದ್ದೇವೆ ನಾವು
ಕಳ್ಳರಿಗೆ
ನಮ್ಮ ಮನೆಯ ಕೀ ಯ
ಅದಕೇ ಎಲ್ಲೂ ನೋಡಿ
ದೋಚುವವರೇ ಈಗ
ಸ್ವಲ್ಪ ಇರಲಿ ಎಚ್ಚರ..
ಇದು ಸದ್ಯದ ರಾಜಕೀಯ !

..............

ಕಂಡ ಕಂಡಲ್ಲೆಲ್ಲಾ ಹೇಳುವರು
ನಮ್ಮ ಯಡ್ಯೂರಪ್ಪ
ಕೋಟಿ ಕೋಟಿ ನುಂಗಿ
ನೀರು ಕುಡಿದರು ಗೌಡರು
ಸೇರಿ ಮಗ ಮತ್ತು ಅಪ್ಪ
ಉಳಿದುದನ್ನು ನಾವೂ ಈಗ
ಸ್ವಲ್ಪತಿಂದರೇನು ತಪ್ಪಾ..?!

..............

ಸಿಕ್ಕ ಅಲ್ಪ ಕಾಲದಲ್ಲೇ ಎಲ್ಲಾ
ಸೇರಿ ಹಂಚಿಕೊಂಡು
ತೇಗುವಷ್ಟು ಉಂಡರು
ಇನ್ನೂ ಹೊಟ್ಟೆ ತುಂಬದವರ
ಸಿಟ್ಟು ಕಂಡು ಕೊನೆಗೆ
ಸಿ ಎಂ ಅಂದರು..
ಪಕ್ಷದಲ್ಲಿರುವವರೆಲ್ಲಾ ಪುಂಡರು !

.............

ಸದನದಲ್ಲಿ ನಡೆಯುವುದು
ತಮ್ಮೊಳಗೇ ನಿಂದನೆ
ಪರಸ್ಪರ ಜಗಳ ಗಲಾಟೆ
ಬೈಗುಳಗಳ ಭರಾಟೆ
ಆದರೆ...
ಮರುದಿನದ
ಪೇಪರಿನಲ್ಲಿ ಸುದ್ದಿ
ಸರ್ಕಾರದ ವಿರುದ್ಧ
ಪ್ರತಿಪಕ್ಷಗಳ ತರಾಟೆ

2 ಕಾಮೆಂಟ್‌ಗಳು:

  1. ಸತೀಶ್... ಇಂದಿನ ರಾಜಕೀಯ ಸ್ಥಿತಿಗತಿಯನ್ನು ತುಂಬಾ ಚೆನ್ನಾಗಿ ವಣರ್ಿಸಿದ್ದೀರಿ... ಧನ್ಯವಾದಗಳು ನಿಮಗೆ... ಆಳುವ ಪಕ್ಷ ಅಳುವ ಜನರನ್ನು ಕಂಡು ಅವರನ್ನು ಸುಧಾರಿಸುವ ಬದಲು ಆಳುವುದರಲ್ಲೇ ತೊಡಗಿರುವುದು ವಿಪಯರ್ಾಸವಲ್ಲದೆ ಇನ್ನೇನು?

    ಪ್ರತ್ಯುತ್ತರಅಳಿಸಿ