ಇಷ್ಟು ದಿನ ಕಂಡು ಕೇಳದ
ಮುಗ್ಧ ಜೀವಿಗಳ ಆಕ್ರಂದನ
ಇಂದು ತಟ್ಟಿದೆ,
ಹಾಕಿಕೊಂಡಿದ್ದಾನೆ ಮನುಜ
ತಾನೇ ಸುತ್ತಲೂ ದಿಗ್ಬಂಧನ
****
ಈ ಭೂಮಿಗೊಬ್ಬನೇ ಒಡೆಯ
ಅಂದುಕೊಂಡಿದ್ದು ಸುಳ್ಳು
ಸದ್ಯ ಕಂಡಾಗ ಅನಿಸಿದ್ದು
ಬದುಕುವ ಹಕ್ಕಿದೆ
ಎಲ್ಲ ಜೀವರಾಶಿಗೆ ಇಲ್ಲೂ
***
ಹೊರಗೆ ಹೊರಟಾಗ ಕಂಡಿದ್ದು
ದೌಲತ್ತು ಸಂಪತ್ತು
ಕುರುಡು ಕಾಂಚಾಣ ಒಂದೇ
ಬರುವಾಗ ಸಾವನ್ನೂ ಕಟ್ಟಿ
ಕೊಂಡಿದ್ದು ಬೆನ್ನ ಹಿಂದೆ
***
ಎಷ್ಟೊಂದು ಹಿಂಸೆ ಯಾತನೆ
ಏಕಾಂತ ಒಂಟಿತನದ ಬದುಕು
ಹೆಜ್ಜೆಯಿಟ್ಟರೆ ಸಾಕು
ಹಿಂಬಾಲಿಸುತ್ತಿದೆ ಸಾವು
ಕಾಲಿನ ಬುಡಕೂ..
***
ನಮ್ಮವರೇ ಇಂದು
ಕಂಡಾಗ ಸರಿವರು
ಮಾರು ದೂರ
ಎಲ್ಲರಿಗೂ ಬೇಕು ಅಂತರ
ಹೇಗಿದೆ ನೋಡಿ...!?
ಸೃಷ್ಟಿಯ ಮುಂದೆ
ಎಲ್ಲರೊಂದೆ
ಅಸ್ಪ್ರಶ್ಯರು ಒಂಥರಾ...!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ