ಸೋಮವಾರ, ಮೇ 25, 2020

ಲಾಕ್ ಡೌನ್ ಕವಿತೆಗಳು


ಇಷ್ಟು ದಿನ ಕಂಡು ಕೇಳದ 
ಮುಗ್ಧ ಜೀವಿಗಳ ಆಕ್ರಂದನ
ಇಂದು ತಟ್ಟಿದೆ,
ಹಾಕಿಕೊಂಡಿದ್ದಾನೆ  ಮನುಜ 
ತಾನೇ ಸುತ್ತಲೂ ದಿಗ್ಬಂಧನ
****
ಈ ಭೂಮಿಗೊಬ್ಬನೇ ಒಡೆಯ 
ಅಂದುಕೊಂಡಿದ್ದು ಸುಳ್ಳು  
ಸದ್ಯ ಕಂಡಾಗ ಅನಿಸಿದ್ದು
ಬದುಕುವ ಹಕ್ಕಿದೆ 
ಎಲ್ಲ ಜೀವರಾಶಿಗೆ ಇಲ್ಲೂ
***
ಹೊರಗೆ ಹೊರಟಾಗ ಕಂಡಿದ್ದು 
ದೌಲತ್ತು ಸಂಪತ್ತು 
ಕುರುಡು ಕಾಂಚಾಣ ಒಂದೇ
ಬರುವಾಗ ಸಾವನ್ನೂ ಕಟ್ಟಿ
ಕೊಂಡಿದ್ದು ಬೆನ್ನ ಹಿಂದೆ
***
ಎಷ್ಟೊಂದು ಹಿಂಸೆ ಯಾತನೆ
ಏಕಾಂತ ಒಂಟಿತನದ ಬದುಕು
ಹೆಜ್ಜೆಯಿಟ್ಟರೆ ಸಾಕು 
ಹಿಂಬಾಲಿಸುತ್ತಿದೆ ಸಾವು
ಕಾಲಿನ ಬುಡಕೂ..
***
ನಮ್ಮವರೇ ಇಂದು 
ಕಂಡಾಗ ಸರಿವರು 
ಮಾರು ದೂರ 
ಎಲ್ಲರಿಗೂ ಬೇಕು ಅಂತರ
ಹೇಗಿದೆ ನೋಡಿ...!?
ಸೃಷ್ಟಿಯ ಮುಂದೆ
ಎಲ್ಲರೊಂದೆ 
ಅಸ್ಪ್ರಶ್ಯರು ಒಂಥರಾ...!!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ